ಹೊಸ ಬಾಳು

ಇಂದು,
ನೀ ಬರೆದ ಪತ್ರವದು
ಬಂದು ತಲುಪಿತು ಇಂದು
ಸಂತಸದ ನೆನಪನ್ನು
ಅಗಲಿಕೆಯ ಅಳಲನ್ನು
ತುಂಬಿ ತಂದಿತು ಇಂದು.
ವಿದ್ಯೆಗೆ ಬುದ್ಧಿಗೆ ಪುರಸ್ಕಾರ
ಕೊಟ್ಟ ಬ್ಯಾಂಕಿಗೆ ನಮಸ್ಕಾರ
ಎಂದು ಹೇಳುತ್ತಾ ನಾನು, ಒಳ ಬಂದೆನಂದು
ಅಕ್ಟೋಬರ್ ತಿಂಗಳ ಹದಿನೆಂಟರಂದು.
ತವರೂರ ತೊರೆದು ಬಹು ದೂರ ಬಂದಿಹೆನು
ದೂರದ ಸುರಪುರದಲ್ಲಿ ಹೊಸ ಬಾಳ ಕಂಡಿಹೆನು.
ಎಲ್ಲೆಡೆ ಹರಡಿಹುದಿಲ್ಲಿ ಬರಡುಗಿರಿ ಪಂಕ್ತಿಗಳು
ಊರ ಚರಿತೆಯ ಸಾರುವ ಭಗ್ನಾವಶೇಷಗಳು.
ಹಸುರಿಲ್ಲ, ಚಿಗುರಿಲ್ಲ, ಹರಿವ ನೀರಿಲ್ಲ
ನನಗಾಗಿ ಮಿಡಿವ ಮನವಿಲ್ಲವಲ್ಲ
ಎಂದು ನೊಂದೆ ನಾನು ದುಃಖದಿಂದ
ಎನ್ನಧಿಕಾರಿ ಕರೆದರೆನ್ನನು ಸ್ನೇಹದಿಂದ.
ದಿಬ್ಬದ ಮೇಲಿನ ಮಹಲಿನ ಮಹಡಿಯಲಿ
ನೋವು ನಲಿವಿಲ್ಲದ ಮೌನದರಮನೆಯಲ್ಲಿ
ಸುಸಜ್ಜಿತ ಕೋಣೆಯಲಿ ಈಗೆನ್ನ ವಾಸ
ಬ್ಯಾಂಕಿನ ಹೊಸ ಶಾಖೆಯಲ್ಲಿ ಈಗೆನ್ನ ಕೆಲಸ.
ಮಾತೆಯ ಮಮತೆಯ ಸಿಹಿಯೂಟ ಈಗಿಲ್ಲ,
ಖಾನಾವಳಿಯ ಖಾರದ ಊಟವೇ ಈಗೆಲ್ಲ!
ಸಾಗುತಿದೆ ಬಾಳು ಹೊಸ ಹಾದಿ ಹಿಡಿದು
ಮಿಡಿಯುತಿದೆ ಮನವು ನನ್ನವರ ನೆನೆದು.
*****
೨೪-೧೧-೧೯೭೯

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯಕ್ತಮಧ್ಯದ ಸ್ವಾಯತ್ತತೆ
Next post ಸಂಗಾತಿ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

cheap jordans|wholesale air max|wholesale jordans|wholesale jewelry|wholesale jerseys